<ಮಂಕುತಿಮ್ಮನ ಕಗ್ಗ
ಮಂಕುತಿಮ್ಮನ ಕಗ್ಗ - ಕಂತು ೧.
ಮಂಕುತಿಮ್ಮನ ಕಗ್ಗ; ಕಗ್ಗ ರಸಧಾರೆ:- ಪದ್ಯ ಒಂದರಿಂದ ಮೂವತ್ತರ ವರೆಗೆ:ಅರ್ಥಸಹಿತ
ಪದ್ಯ-೧
 
ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ, 
ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ|| 
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ| 
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ||				೧|| 
 
(ಕಾಣದೊಡಂ+ಅಳ್ತಿಯಂ) (ಪರಬ್ಬೊಮ್ಮಂ+ಎಂದು) 
ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ  ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ  ಆ ವಿಚಿತ್ರಕ್ಕೆ ನಮಿಸು ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು. ನಾವಿರುವ ಭೂಮಿಯಂತಹ 9 .80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ ಸೇರಿದಂತೆ ಲಕ್ಷಾಂತರ ಸೌರಮಂಡಲಗಳಿರುವ ನಮ್ಮ ಕ್ಷೀರಪಥ, ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಆಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಕಗ್ಗದ ಆಂತರ್ಯ ಮತ್ತು ವಿಶ್ವದ ಒಂದು ಅನುವಷ್ಟೂ ಅಲ್ಲದ ನಾವು ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ. ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ ನರರೇನು ಭಾವುಸುವರದರಂತೆ ಕಾಣುವನು ಶಿವ ಶರಣರ ಮಾತು. ಹೀಗೆ ಒಂದೇ ಸತ್ಯವನ್ನು ಎಲ್ಲ ಮಹಾ ಮಹಿಮರೂ ಹೇಳಿದ್ದರೆ ಅಲ್ಲವೇ?

ನೋಡಿ
ಮಂಕುತಿಮ್ಮನ ಕಗ್ಗ-ಕಂತು ೨; ಪದ್ಯ ೩೧ ರಿಂದ ೬೦
 ಮಂಕುತಿಮ್ಮನ ಕಗ್ಗ-ಕಂತು ೧.
 ಮಂಕುತಿಮ್ಮನ ಕಗ್ಗ-ಕಂತು ೨.
 ಮಂಕುತಿಮ್ಮನ ಕಗ್ಗ-ಕಂತು ೩; ಪದ್ಯ ೬೧ ರಿಂದ ೯೦
 ಮಂಕುತಿಮ್ಮನ ಕಗ್ಗ-ಕಂತು ೪.
 ಮಂಕುತಿಮ್ಮನ ಕಗ್ಗ-ಕಂತು ೫; ಪದ್ಯ ೧೨೧ ರಿಂದ ೧೫೦
 ಮಂಕುತಿಮ್ಮನ ಕಗ್ಗ-ಕಂತು ೬.
 ಮಂಕುತಿಮ್ಮನ ಕಗ್ಗ-ಕಂತು ೭.
 ಮಂಕುತಿಮ್ಮನ ಕಗ್ಗ-ಕಂತು ೮.
 ಮಂಕುತಿಮ್ಮನ ಕಗ್ಗ-ಕಂತು ೯.
 ಮಂಕುತಿಮ್ಮನ ಕಗ್ಗ-ಕಂತು ೧೦.
 ಮಂಕುತಿಮ್ಮನ ಕಗ್ಗ-ಕಂತು ೧೧.
 ಮಂಕುತಿಮ್ಮನ ಕಗ್ಗ-ಕಂತು ೧೨.--೧೨.ಪದ್ಯ ೩೩೧ ರಿಂದ ೩೬೦ 
 ಮಂಕುತಿಮ್ಮನ ಕಗ್ಗ-ಕಂತು ೧೩.

ಕಾವ್ಯ
ಮಂಕುತಿಮ್ಮನ ಕಗ್ಗ - ರಚನೆ: ಡಿ.ವಿ.ಗುಂಡಪ್ಪ

ಪರಿವಿಡಿ

ಉಲ್ಲೇಖ ಪದ್ಯ೧ ರಿಂದ ೯೪೫ ಕ್ಕೆ
ವರ್ಗ:ಡಿ.ವಿ.ಜಿ. ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ
 ಮಂಕುತಿಮ್ಮನ ಕಗ್ಗ